ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಕನ್ನಡ ನುಡಿಗಳಿಗೆ ಪ್ರತಿಬಿಂಬ: ಗೋಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 8 , 2013
ಡಿಸೆ೦ಬರ್ 7, 2013

ಯಕ್ಷಗಾನ ಕನ್ನಡ ನುಡಿಗಳಿಗೆ ಪ್ರತಿಬಿಂಬ: ಗೋಡೆ

ಉಡುಪಿ : ಸುಲಭ ಶೈಲಿಯ ಸುಂದರ ಕಲೆಯಾಗಿ ಮನರಂಜನೆ ನೀಡುವ ಯಕ್ಷಗಾನ ಕನ್ನಡ ನುಡಿಗಳ ಪ್ರತಿಬಿಂಬ ಎಂದು ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು. ಉಡುಪಿ ಶ್ರೀ ಪಲಿಮಾರು ಹೃಷಿಕೇಶ ಸಂಸ್ಥಾನ, ಯಕ್ಷರಂಗಸ್ಥಳ ವತಿಯಿಂದ ಉಡುಪಿ ರಥಬೀದಿ ವಿದ್ಯಾಮಾನ್ಯ ಮಂದಿರದಲ್ಲಿ ಶನಿವಾರ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

59 ವರ್ಷಗಳ ಹಿಂದೆ ತಾನು ಯಕ್ಷಗಾನ ಪ್ರವೇಶ ಮಾಡುವಾಗ ಪ್ರೋತ್ಸಾಹ ಇರಲಿಲ್ಲ. ಯಕ್ಷಗಾನ ಬೆಳೆದೂ ಇರಲಿಲ್ಲ. ಯಕ್ಷಗಾನಕ್ಕೆ ಬರುವವರು ಪುಂಡು ಪೋಕರಿಗಳು ಎಂದು ಅಂದುಕೊಳ್ಳುವ ಕಾಲವಾಗಿತ್ತು. ಯಕ್ಷಗಾನದ ಉತ್ಕಟ ಪ್ರೀತಿಯಿಂದಾಗಿ ಯಕ್ಷಗಾನಕ್ಕೆ ಬಂದು ಸ್ರ್ತೀವೇಷಧಾರಿಯಾಗಿ ಬಳಿಕ ಪುಂಡುವೇಷ, ಪ್ರಧಾನ ವೇಷಧಾರಿಯಾಗಿ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ತನ್ನದೇ ಛಾಪು ಅಭಿವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿದರು. ಪರ್ಯಾಯ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಮೋದ್ ಮಧ್ವರಾಜ್, ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನೀಲಾವರ ದೇವಸ್ಥಾನ ಧರ್ಮದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ವಿಜಯ ಬಲ್ಲಾಳ್, ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ್ ಶೆಟ್ಟಿ, ದತ್ತಮೂರ್ತಿ ಭಟ್ಟ, ಪಟ್ಟಾಭಿರಾಮ ಆಚಾರ್ಯ, ನಾಗೇಂದ್ರ ಬಿ.ವಿ. ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಉಪಾಧ್ಯಾಯ ಕಲ್ಮಂಜೆ ಕಾರ್ಯಕ್ರಮ ನಿರೂಪಿಸಿದರು.

ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ