ಯಕ್ಷಗಾನ ಕನ್ನಡ ನುಡಿಗಳಿಗೆ ಪ್ರತಿಬಿಂಬ: ಗೋಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 8 , 2013
|
ಡಿಸೆ೦ಬರ್ 7, 2013
|
ಯಕ್ಷಗಾನ ಕನ್ನಡ ನುಡಿಗಳಿಗೆ ಪ್ರತಿಬಿಂಬ: ಗೋಡೆ
ಉಡುಪಿ :
ಸುಲಭ ಶೈಲಿಯ ಸುಂದರ ಕಲೆಯಾಗಿ ಮನರಂಜನೆ ನೀಡುವ ಯಕ್ಷಗಾನ ಕನ್ನಡ ನುಡಿಗಳ ಪ್ರತಿಬಿಂಬ ಎಂದು ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು. ಉಡುಪಿ ಶ್ರೀ ಪಲಿಮಾರು ಹೃಷಿಕೇಶ ಸಂಸ್ಥಾನ, ಯಕ್ಷರಂಗಸ್ಥಳ ವತಿಯಿಂದ ಉಡುಪಿ ರಥಬೀದಿ ವಿದ್ಯಾಮಾನ್ಯ ಮಂದಿರದಲ್ಲಿ ಶನಿವಾರ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
59 ವರ್ಷಗಳ ಹಿಂದೆ ತಾನು ಯಕ್ಷಗಾನ ಪ್ರವೇಶ ಮಾಡುವಾಗ ಪ್ರೋತ್ಸಾಹ ಇರಲಿಲ್ಲ. ಯಕ್ಷಗಾನ ಬೆಳೆದೂ ಇರಲಿಲ್ಲ. ಯಕ್ಷಗಾನಕ್ಕೆ ಬರುವವರು ಪುಂಡು ಪೋಕರಿಗಳು ಎಂದು ಅಂದುಕೊಳ್ಳುವ ಕಾಲವಾಗಿತ್ತು. ಯಕ್ಷಗಾನದ ಉತ್ಕಟ ಪ್ರೀತಿಯಿಂದಾಗಿ ಯಕ್ಷಗಾನಕ್ಕೆ ಬಂದು ಸ್ರ್ತೀವೇಷಧಾರಿಯಾಗಿ ಬಳಿಕ ಪುಂಡುವೇಷ, ಪ್ರಧಾನ ವೇಷಧಾರಿಯಾಗಿ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ತನ್ನದೇ ಛಾಪು ಅಭಿವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿದರು. ಪರ್ಯಾಯ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಮೋದ್ ಮಧ್ವರಾಜ್, ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನೀಲಾವರ ದೇವಸ್ಥಾನ ಧರ್ಮದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ವಿಜಯ ಬಲ್ಲಾಳ್, ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ್ ಶೆಟ್ಟಿ, ದತ್ತಮೂರ್ತಿ ಭಟ್ಟ, ಪಟ್ಟಾಭಿರಾಮ ಆಚಾರ್ಯ, ನಾಗೇಂದ್ರ ಬಿ.ವಿ. ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಉಪಾಧ್ಯಾಯ ಕಲ್ಮಂಜೆ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://www.vijaykarnataka.com
|
|
|